ಮಣಿಂದ್ರ ಅಗರ್ವಾಲ್ ಅವರು ೨೦ಮೇ ೧೯೬೬ ರಲ್ಲಿ ಅಲಹಬಾದಲ್ಲಿ ಜನಿಸಿದರು. ಅವರು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರಾಗಿದ್ದಾರೆ. ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದ ಉಪನಿರ್ದೇಶಕರಾಗಿದ್ದಾರೆ. ಗಣಿತಶಾಸ್ತ್ರದ ಮೊದಲ ಇನ್ಫೋಸಿಸ್ ಪ್ರಶಸ್ತಿ ಮತ್ತು ೨೦೦೩ ರಲ್ಲಿ ಗಣಿತ ವಿಜ್ಞಾನದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಅವರು ಪಡೆದಿದ್ದರು. ೨೦೧೩ ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. == ಆರಂಭಿಕ ಜೀವನ == ಮಣಿಂದ್ರ ಅಗರ್ವಾಲ್ ಐಐಟಿ ಕಾನ್ಪುರ್ನಿಂದ ಬಿ.ಟೆಕ್ ಪದವಿ ಪಡೆದರು. ೧೯೮೬ ಬ್ಯಾಚ್) ಮತ್ತು ಇದೇ ಸಂಸ್ಥೆಯಿಂದ ಪಿಹೆಚ್ಡಿ ಪದವಿ ಪಡೆದರು. == ವೃತ್ತಿಜೀವನ == ಅವರು ನೀರಾಜ್ ಕಯಾಲ್ ಮತ್ತು ನಿತಿನ್ ಸಕ್ಸೇನಾರೊಂದಿಗೆ ಎಕೆಎಸ್ ಅವಿಭಾಜ್ಯ ಪರೀಕ್ಷೆಯನ್ನು ರಚಿಸಿದರು. ಇದಕ್ಕಾಗಿ ಅವರು ಮತ್ತು ಅವರ ಸಹ-ಲೇಖಕರು ೨೦೦೬ರಲ್ಲಿ ಫುಲ್ಕರ್ಸನ್ ಪ್ರಶಸ್ತಿಯನ್ನು ಮತ್ತು ಗೋಡೆಲ್ ಪ್ರಶಸ್ತಿಯನ್ನು ಪಡೆದರು. ನಲ್ಲಿ ಬಹುಪದೀಯ ಎಂದು ಸಾಬೀತಾಗಿರುವ ಸಮಯದಲ್ಲಿ ಅವಿಭಾಜ್ಯತೆಗೆ - ಅಂಕಿಯ ಸಂಖ್ಯೆಯನ್ನು ಪರೀಕ್ಷಿಸಲು ಮೊದಲ ಬೇಷರತ್ತಾದ ನಿರ್ಣಾಯಕ ಅಲ್ಗಾರಿದಮ್ ಆಗಿದೆ ಎಂದು ಸಂಶೋಧಿಸಿದರು. ಹಾಗೆ ಈ ಕೆಲಸಕ್ಕಾಗಿ ೨೦೦೨ರಲ್ಲಿ ಕ್ಲೇ ರಿಸರ್ಚ್ ಅವಾರ್ಡ್ ೨೦೦೮ ರ ಸೆಪ್ಟೆಂಬರ್ನಲ್ಲಿ, ಗಣಿತಶಾಸ್ತ್ರದ ವಿಶಾಲ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಗಳಿಗಾಗಿ ಅಗರ್ವಾಲ್ ಅವರನ್ನು ಮೊದಲ ಇನ್ಫೋಸಿಸ್ ಗಣಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅವರು ೨೦೦೩-೦೪ರಲ್ಲಿ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿನಲ್ಲಿ ಸಂದರ್ಶಕ ವಿದ್ವಾಂಸರಾಗಿದ್ದರು. == ಪ್ರಶಸ್ತಿಗಳು ಮತ್ತು ಗೌರವಗಳು == ಕ್ಲೇ ಸಂಶೋಧನಾ ಪ್ರಶಸ್ತಿ (೨೦೦೨) ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (೨೦೦೩) ಐಸಿಟಿಪಿ ಪ್ರಶಸ್ತಿ (೨೦೦೩) ಐಐಟಿ ಕಾನ್ಪುರ್ ಡಿಸ್ಟಿಂಗ್ವಿಶ್ಡ್ ಅಲುಮಸ್ ಅವಾರ್ಡ್ (೨೦೦೩) ಫುಲ್ಕರ್ಸನ್ ಪ್ರಶಸ್ತಿ (೨೦೦೬) ಗೋಡೆಲ್ ಪ್ರಶಸ್ತಿ (೨೦೦೬) ಜಿ ಡಿ ಬಿರ್ಲಾ ಪ್ರಶಸ್ತಿ (೨೦೦೯) ಪ್ರಶಸ್ತಿ (೨೦೧೦) ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿ(೨೦೧೩) ಎಸಿಸಿಎಸ್-ಸಿಡಿಎಸಿ ಫೌಂಡೇಶನ್ ಪ್ರಶಸ್ತಿ (೨೦೧೫) == ಉಲ್ಲೇಖಗಳು ==